ಧರ್ಮಸ್ಥಳ ಪ್ರಕರಣ : ನಿಗೂಡ ಸತ್ಯ ಭೇಧಿಸಲು ಮುಂದಾದ ಎಸ್ ಐ ಟಿ. ಶವಗಳ ಅಗೆತ ಶುರು

ಧರ್ಮಸ್ಥಳದ ವಿವಿದೆಡೆ ಹಲವು ಮೃತದೇಹಗಳನ್ನು ಹೂತಿರುವದಾಗಿ ಹೇಳಿಕೆ ನೀಡಿರುವ ಅನಾಮಿಕ ನೀಡಿದ ದೂರಿನ ಅನ್ವಯ ಎಸ್ ಐ ಟಿ ತೀವ್ರ ತನಿಖೆ ಕೈಗೊಂಡಿದೆ. 

ನಿನ್ನೆಯಷ್ಟೇ ಸುಮಾರು 13 ಕಡೆಗೆ ಮೃತದೇಹಗಳನ್ನು ಹೂತಿರುವ ಜಾಗೆ ತೋರಿಸಿರುವ ಕಡೆಗಳಲ್ಲಿ ಗುರುತು ಮಾಡಿಕೊಳ್ಳಲಾಗಿತ್ತು. 

ಇಂದು ಎಸ್ ಐ ಟಿ ಹೂತಿರುವ ಮೃತದೇಹಗಳನ್ನು ಹೊರತೆಗೆಯುವ ಕಾರ್ಯ ಆರಂಭಿಸಿದೆ. ಸ್ಥಳಕ್ಕೆ ವಿಧಿ ವಿಜ್ಞಾನ ತಜ್ಞರು, ಕ್ರೈಮ್ ಅಧಿಕಾರಿಗಳು ಉಪಸ್ಥಿತರಿದ್ದಾರೆ.

ಮೃತದೇಹಗಳನ್ನು ಹೊರತೆಗೆಯುವ ಕಾರ್ಯಕ್ಕೆ ಸುಮಾರು 20 ಕ್ಕೂ ಹೆಚ್ಚು ಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತಿದೆ.

Share

Leave a Comment