ಧಾರವಾಡ ಸೇರಿದಂತೆ ರಾಜ್ಯದ ವಿವಿದೆಡೆ ಇರುವ ದನದ ಮಾಂಸ ವ್ಯಾಪಾರಿಗಳು, ಮಾಂಸ ಮಾರಾಟ ಬಂದ ಮಾಡಿದ್ದಾರೆ.
ಇತ್ತೀಚಿಗೆ ದನ ಸಾಗಾಟ ಮಾಡುವವರ ಮೇಲೆ ಹಲ್ಲೆಗಳು ನಡೆಯುತ್ತಿರುವದರಿಂದ ಈ ವ್ಯಾಪಾರವೇ ಬೇಡ ಎಂದು ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ನಿನ್ನೇ ಧಾರವಾಡದಲ್ಲಿ ಸಭೆ ಸೇರಿದ್ದ ವ್ಯಾಪಾರಿಗಳು ದನದ ಮಾಂಸ ಮಾರಾಟ ನಿಲ್ಲಿಸಲು ಒಕ್ಕೂರಲಿನ ತೀರ್ಮಾನ ತೆಗೆದುಕೊಂಡಿದ್ದಾರೆ.
ಬೆಳಗಾವಿಯಲ್ಲಿ ಕಳೆದ ಶುಕ್ರವಾರದಿಂದಲೇ ಮಾಂಸ ಮಾರಾಟ ಬಂದ ಮಾಡಲಾಗಿದ್ದು, ಇಂದಿನಿಂದ ರಾಜ್ಯದಾಧ್ಯಂತ ವ್ಯಾಪಾರ ಬಂದ್ ಆಗಲಿದೆ.
